ವಿಶೇಷ ಸುದ್ದಿಗಳು

वक्रतुण्ड महाकाय सूर्यकोटि समप्रभ । निर्विघ्नं कुरु मे देव सर्वकार्येषु सर्वदा ॥

Ghante Ganapati

ಘಂಟೆ ಗಣಪತಿ

ತಾ|| ಯಲ್ಲಾಪುರ (ಉ.ಕ)

ದೇವಸ್ಥಾನದ ವಿಶೇಷತೆ

ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಚಂದಗುಳಿ- ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಚಂದಗುಳಿ ಗ್ರಾಮದಲ್ಲಿದೆ.ಈ ದೇವಸ್ಥಾನವನ್ನು ಸೋದೆ ಅರಸರ ಕಾಲದಲ್ಲಿ ಪತಿಷ್ಠಾಪಿಸಲಾಯಿತೆಂಬ ಪ್ರತೀತಿ ಇದೆ. ಶ್ರೀ ಸ್ವರ್ಣವಲ್ಲೀ ಮಠದ ಯಲ್ಲಾಪುರ ಸೀಮಾ ಭಾಗದಲ್ಲಿ ಬರುವ ಈ ಶ್ರೀ ಸಿದ್ಧಿವಿನಾಯಕ ದೇವಸ್ಥಾನವು ಶ್ರೀ ಮಠದ ಅಧೀನದಲ್ಲಿದ್ದು ಶ್ರೀ ಮಠದ ಶ್ರೀಗಳವರ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯನೆರವೇರುತ್ತದೆ.

ಶ್ರೀ ಸಿದ್ಧಿವಿನಾಯಕ ದೇವರ ಮೂರ್ತಿ ಪ್ರತಿಷ್ಠೆಯು ಶ್ರೀ ಶಕೆ 1901 ನೇ ಸಿದ್ಧಾರ್ಥಿಸಂ|| ವೈಶಾಖ ಶುಕ್ಲ ಸಪ್ತಮಿ ಗುರವಾರ ದಿ;3-5-1979 ರಂದು ಶ್ರೀ ಶ್ರೀ ಶ್ರೀ ಸರ್ವಜೆÐೀಂದ್ರ ಸರಸ್ವತೀ ಮಹಾಸ್ವಾಮಿಜಿಗಳ ಅಮೃತ ಹಸ್ತದಿಂದ ನೆರವೇರಿಸಿದರು.ಶ್ರೀ ಸಿದ್ಧಿವಿನಾಯಕ ದೇವರ ಆರಾಧಕರಿಗೆ ತಮ್ಮ ಕಷ್ಟಕಾಲದಲ್ಲಿ ಘಂಟೆಯನ್ನು ಹರಕೆ ಮಾಡಿಕೊಂಡು, ಕಾರ್ಯ ಪೂರ್ಣಗೊಂಡಮೇಲೆ ಹರಕೆ ತೀರಿಸುವಪರಿ ರೂಢಿಯಲ್ಲಿದೆ. ಅನಾದಿ ಕಾಲದಿಂದಲೂ ಭಕ್ತಾದಿಗಳು ಘಂಟೆ ಅರ್ಪಿಸಿ,ಹೋಮ ಹವನ ಮಾಡಿ ತಮ್ಮ ತಮ್ಮ ಹರಕೆ ಪೂರೈಸಿಕೊಳ್ಳುವ ವಾಡಿಕೆ ಇದೆ .......

ಮುಂದೆ ಓದಿ